ಸ್ವಲ್ಪ ತಲೆಕೆಡಿಸಿಕೊಂಡು ಇದನ್ನು ಓದುವಾಗ ನಿಮ್ಮ ತುಟಿಯ ಮೇಲೆ ಕನಿಷ್ಟವಾದರೂ ಮುಗುಳ್ನಗೆ ಉಂಟಾದರೆ ಇಲ್ಲವೇ ಗಟ್ಟಿಯಾಗಿ ಓದಿ ನಿಮ್ಮೊಡನೆಯಿರುವವರ ಜೊತೆ ಹಂಚಿಕೊಂಡರೆ ನೀವು ಓದಿದ್ದು ಸಾರ್ಥಕ ಕಣ್ರೀ.. ನಿಮಗೂ ಯಾವುದಾದರೂ ಇದೇ ರೀತಿ ನೋಡಿದ್ದು , ತಲೆಗೆ ಹೊಳೆದಿದ್ದು , ಬೇರೆಯವರು ಹೇಳಿದ್ದು ಇದ್ದರೆ ಹಂಚಿಕೊಳ್ರೀ...ನಿಮಗೆ ಸ್ವಾಗತ. . ಕಣ್ರಿ..
Monday, 30 September 2013
ಅಂಗವಿಕಲರೇ!
ಸುಮಾರು ದಿವಸದಿಂದ ಜಯನಗರ ನಾಲ್ಕನೇ ಬ್ಲಾಕ್ ನಲ್ಲಿ ಒಂದು ಬೋರ್ಡ್ ಬರಹ ನನ್ನ ಗಮನಕ್ಕೆ ಬಂದಿತ್ತು. ಅದೇನೆಂದರೆ ಟೆಲಿಪೋನ್ ಬೂತ್ ನ ಬರಹವೇನೆಂದರೆ ಅಂಗವಿಕಲ ಟೆಲಿಪೋನ್ ಬೂತ್ ಎಂದು. ಹತ್ತಿರದಿಂದ ಗಮನಿಸಿದೆ ಯಾರೋ ಒಬ್ಬ ವ್ಯಕ್ತಿ ಕುಳಿತಿದ್ದ ಮತ್ತು ಒಂದು ಪೋನ್ ಕೂಡ ಇತ್ತು. ಬಹುಷಃ ಅವನೇ ಅಂಗವಿಕಲನಿರಬಹುದೆಂದು ತಿಳಿದೆ. ಇದೇನೂ ಅಂತಹ ದೊಡ್ಡ ವಿಷಯ ಅಲ್ಲ. ಕೆಲವು ತಿಂಗಳಿಂದ ಆ ಬೂತ್ ಮುಚ್ಚಿದೆ.
ಆ ಬೂತ್ ನ ಮೇಲೆ ಮತ್ತೊಮ್ಮೆ ನೋಡಿದೆ. ಅದೇ ಬರಹ . ಆದರೆ ಏನಾಯಿತೋ ಗೊತ್ತಿಲ್ಲ. ಅಂಗ ವಿಕಲ ಟೆಲಿಪೋನ್ ಬೂತ್ ಮಾತ್ರ ಇದ್ದದ್ದು ಇನ್ನೊಂದು ಸಲ ಓದಿಕೊಂಡೆ. ಈಗ ತಿಳಿಯಿತು, ಇಲ್ಲಿ ಎರಡು ಅಂಗವಿಕಲಗಳಿವೆ ಎಂದು. ಮೊದಲನೆಯದು ಬೂತ್ ನಡೆಸುತ್ತಿದ್ದ ವ್ಯಕ್ತಿ ಅಂಗವಿಕಲನಾದರೆ ಎರಡನೆಯದು ಅಂಗವಿಕಲ ಪೋನ್ ಇರಬಹುದೆಂದು ನನ್ನ ಅನಿಸಿಕೆ. ಈಗ ಎರಡೂ ಕೆಲಸ ಮಾಡುತ್ತಿಲ್ಲವೇನೊ?
ಈಗ ಯಾವುದಾದರೂ ಸ್ಕೀಮ್ ಬಂದಿರಬಹುದೇ ಎಂದು? ಅಂಗವಿಕಲರಿಗೆ ಅಂಗವಿಕಲ ಸೆಟ್ ಗಳನ್ನೇ ಕೊಡಬಹುದೆಂಬುದು. ಇದು ನಿಮಗೇನಾದರು ಗೊತ್ತಾ?
Saturday, 27 April 2013
ಕನ್ನಡಿಯಲ್ಲಿ ನಿಮ್ಮ ಮುಖ ನೋಡಿ.....
ನಾನು ರೈಲಿನಲ್ಲಿ ಪ್ರಯಾಣ ಮಾಡುತ್ತಿರುವಾಗ ಗಮನಿಸಿದ ಹಾಗು ಹಲವು ಸಲ ನೋಡಿ ಮನಸ್ಸಿನೊಳಗೇ ನಗುತ್ತಿದ್ದುದು ಇದೆ. ಅದರಲ್ಲೂ ಹದಗು ಪ್ರಯಾಣದ ರೈಲುಗಳಾದರೆ ಅದರಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಇರುವ ಕಾರಣ ರೈಲಿನಲ್ಲಿ ನಿಮಗೆ ಬಿಟ್ಟಿ ಮನರಂಜನೆ ಸಿಗುವುದು ಎಓದು ನನ್ನೆ ಅನಿಸಿಕೆ.
ರೈಲಿನ ಕೋಚಿನ ಅಥವಾ ಬೋಗಿ ಎರಡೂ ತುದಿಯಲ್ಲಿ ಟಾಯ್ಲೆಟ್ ಮೊದಲು ಕನ್ನಡಿ ಮತ್ತು ಕೈ ತೊಳೆಯಲು ( ಏನು ಬೇಕಾದರೂ ತೊಳೆಯಬಹುದು) ನೀರಿನ ವ್ಯವಸ್ಥೆ ಮತ್ತು ಸಿಂಕು ಇರುತ್ತದೆ. ಈ ಕನ್ನಡಿಯೇ ನನ್ನೆ ಮನರಂಜನೆಗೆ ಮುಖ್ಯ ವಸ್ತು. ರೈಲು ಹತ್ತುವಾಗ ಹೆಚ್ಚು ಜನ ಕನ್ನಡಿಯ ಬಗ್ಗೆ ಗಮನ ಹರಿಸಲು ಹೋಗುವುದಿಲ್ಲ. ಆದರೆ ಜನರು ಇಳಿಯುವಾಗ ಶೇಕಡ ತೊಂಬತ್ತರಷ್ಟು ಮಂದಿ ಕನ್ನಡಿಯಲ್ಲಿ ತಮ್ಮ ಮುಖ ದರ್ಶನ ಮಾಡಿಯೇ ಕೆಳಗಿಳಿಯುತ್ತಾರೆ, ಅದೂ ಕೆಲವೇ ಕ್ಷಣಗಳು ಮಾತ್ರ. ಆದರೆ ರೈಲು ಚಲಿಸಿತ್ತಿರುವಾಗೆ ಪಡ್ಡೆ ಹುಡುಗರು ಮತ್ತು ಯುವ ಪ್ರಾಯದವರು ತಮ್ಮನ್ನು ಕನ್ನಡಿಯಲ್ಲಿ ನೋಡಿಕೊಳ್ಳುವುದನ್ನು ಗಮನಿಸುತ್ತಿದ್ದರೆ ನೀವು ತುಂಬೆ ಮನಸ್ಸಿನಿಂದ ಮನರಂಜಿಸಿಕೊಳ್ಳಬಹುದು. ನಾನು ಗಮನಿಸಿದ ಹಾಗೆ ಹೆಚ್ಚು ಯುವಕರು ಒಂದೇ ರೀತಿ ಕನ್ನಡಿಯ ಮುಂದೆ ನಡೆದುಕೊಳ್ಳುವುದು. ಮೊದಲಿಗೆ ತಮ್ಮ ತಲೆಕೂದಲನ್ನು ಸರಿ ಮಾಡಿಕೊಳ್ಳುತ್ತಾರೆ. ಕೆಲವರು ಮುಂದಿನ ಕೂದಲನ್ನು ಹಿಂದಕ್ಕೆ ತಳ್ಳಿಕೊಂಡರೆ , ಕೆಲವರು ಕೂದಲನ್ನು ಒತ್ತಿ ಒತ್ತಿ ಅಥವಾ ಕೈ ಬೆರಳಿನಿಂದ ತೀಡಿಕೊಂಡು ಒಂದು ರೂಪಕ್ಕೆ ತರಿಸಿಕೊಳ್ಳುತ್ತಾರೆ.
ಮುಂದಿನ ಹಂತವೇ ಸ್ವಾರಸ್ಯಕರ . ಮೊದಲಿಗೆ ಮುಖ ಸರಿಯಾಗಿರಿಸಿಕೊಂಡು ನೋಡಿಕೊಳ್ಲುತ್ತಾರೆ ನಂತರ ಕಿರುನಗೆಯನ್ನು ತುಟಿಯಲ್ಲಿ ಮಾಡಿಕೊಳ್ಳುತ್ತಾರೆ. ಹಾಗೆ ಮುಂದುವರಿಸಿಕೊಂಡು ಮಖವನ್ನು ಓರೆಯಾಗಿ ಮಾಡಿಕೊಂಡು ತಾನು ನಕ್ಕರೆ ಹೇಗೆ ಕಾಣುತ್ತಿರುವೆನೆಂದು ನೋಡಿಕೊಳ್ಳುವುದು. ಇದಾದ ತಕ್ಷಣ ಕೆಲವರಲ್ಲಿ ಅನುಮಾನ ಮೂಡಿದ ಹಾಗೆ ಕನ್ನಡಿಯ ಮುಂದಕ್ಕೆ ವಾಲಿಕೊಂಡು ಹಲ್ಲುಗಳನ್ನು ಪರೀಕ್ಷಿಸಿಕೊಳ್ಳುವುದು. ಎರಡೂ ದಂತಪಂಕ್ತಿಯನ್ನು ನೋಡಿಕೊಂಡು ತುಟಿಯನ್ನು ವಿಚಿತ್ರ ರೀತಿಯಲ್ಲಿ ಮಾಡುವುದನ್ನು ನೀವು ದೂರದಿಂದಲೇ ಗಮನಿಸಿದರೆ ನೀವೂ ಕೂಡ ಮನಸ್ಸಿನಲ್ಲಿ ನಗದೇ ಇರಲಾರಿರಿ. ಮುಂದಿನ ಹಂತವೇ ಕಣ್ಣುಗಳನ್ನು ಪರೀಕ್ಷಿಸಿಕೊಳ್ಳುವುದು ಅರ್ಥಾತ್ ನೋಡಿಕೊಳ್ಳುವುದು. ಮೊದಲಿಗೆ ಕಣ್ಣುಗಳನ್ನು ಅಗಲ ಮಾಡಿ , ನಂತರ ಕಿರಿದು ಮಾಡಿ, ವಾರೆಗಣ್ಣು ಮಾಡಿ ನೋಡಿದ ಮೇಲೆಯೇ ಎನೋ ಒಂದು ರೀತಿಯ ತೃಪ್ತಿ ಆ ವ್ಯಕ್ತಿಗೆ.
ಇಲ್ಲಿ ಗಮನಿಸಬೇಕಾದದ್ದು ಒಂದು ವಿಷಯವೆಂದರೆ ಕನ್ನಡಿಯ ಮುಂದೆ ನಿಂತಾಗ ಅವನು ಯಾವುದೇ ಅಡಚಣೆಯಿಲ್ಲದಿದ್ದಾಗ ಮಾತ್ರ ಈ ಶೃಂಗಾರ. ಹಲವರು ತನ್ನ ಸುತ್ತಮುತ್ತ ಇದ್ದರೂ ಕ್ಯಾರೇ ಎನ್ನುವುದಿಲ್ಲ. ತನ್ನನ್ನು ಯಾರೂ ಗಮನಿಸುತ್ತಿಲ್ಲ ಎಂಬುದು. ಆದರೆ ವಾಸ್ತವವಾಗಿ ನನ್ನಂತಹ ಹಲವೆ ಜನರು ಪೇಪರ್ ಓದಿದ ಮೇಲೆ, ಪತ್ರಿಕೆಗಳನ್ನು ತಿರುವಿಹಾಕಿದ ಮೇಲೆ, ಸುಮ್ಮನೆ ಟೈಂ ಪಾಸ್ ಗೆ ಅಲ್ಲಿ ಇಲ್ಲಿ ನೋಡುತ್ತಿರುವಾಗ ದೂರದಿಂದ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಬಹುದು. ನಾವು ಆ ವ್ಯಕ್ತಿಯ ಹಿಂದೆ ಇರುವ ಕಾರಣ ಅವನ ಮುಖದ ಚಲನವಲನಗಳನ್ನು ದರ್ಶನ ನಮಗೆ ಲಭ್ಯವಾಗಿ ಪುಕ್ಕಟೆ ಮನರಂಜನೆ ಕೊಡುತ್ತದೆ. ಹೆಂಗಸರು ಈ ರೀತಿ ನಡೆದುಕೊಳ್ಳುವುದು ಅಪರೂಪ.
ಮುಂದಿನ ಸಲ ಕನ್ನಡಿಯಲ್ಲಿ ನಮ್ಮ ಮುಖ ದರ್ಶನದ ಜೊತೆಗೆ ಕನ್ನಡಿಯ ಕಡೆಗೇ ಇನ್ನೂ ಯಾರದಾದರು ಮುಖವಿದೆಯೆ ಎಂದು ಕನ್ನಡಿಯಲ್ಲೇ ಗಮನಿಸಿ. ಇಲ್ಲದಿದ್ದರೆ ನೀವು ಪುಕ್ಕಟೆ ಮನರಂಜನೆಗೆ ಒಂದು ವಸ್ತುವಾಗುವಿರಿ.
Thursday, 3 January 2013
ಮೂಗು ತುದಿಯಲ್ಲೇ ಕೋಪ .. . ...
ಇವನಿಗೆ ಯಾವಾಗಲೂ ಮೂಗಿನ ತುದಿಯಲ್ಲೇ ಕೋಪ " ಎಂದು ನನ್ನ ಅಕ್ಕ ಆಗಾಗ ನನ್ನನ್ನು ಚಿಕ್ಕವನಿದ್ದಾಗ ರೇಗಿಸುತ್ತಿದ್ದಳು. ಯಾವಾಗ ಎಂದರೆ ಅದೂ ಕೋಪ ಇಳಿದ ಮೇಲೆ. ಇದನ್ನು ಓದುತ್ತಿರುವವರಿಗೂ ಅನುಭವ ಆಗಿರಬೇಕೆ ಅಥವಾ ಅನುಭವಿಸಿರಬೇಕು ಎಂದು ನನ್ನ ಅನಿಸಿಕೆ.ಆದರೆ ನನ್ನ ಸಂದೇಹ ಎಂದರೆ ಮೂಗು ತುದಿಯಲ್ಲಿ ಕೋಪವಿರುತ್ತೋ ಅಥವಾ ಮೂಗಿನ ಬುಡದಲ್ಲಿ ಕೋಪವಿರುತ್ತೋ ! ಎನ್ನುವುದು. ಮೂಗಿನ ತುದಿಯಲ್ಲಿ ಕೋಪವಿದ್ದರೆ ಮುಂಗೋಪಿ ಎಂದು ಕರೆಯಬಹುದು ಎಂದುಕೊಳ್ಳೋಣ ಅದೇ ಮೂಗಿನ ಬುಡದಲ್ಲಿ ಕೋಪವಿದ್ದರೆ ಹಿಂಗೋಪಿ ಅಥವಾ ಮಧ್ಯಗೋಪಿ ಎಂದು ಎಲ್ಲೂ ಕರೆದಿರುವುದನ್ನು ನಾನು ಓದಿಲ್ಲ ಅಥವಾ ಕೇಳಿಲ್ಲ.
ಎರಡನೆಯದು ಮೂಗಿನ ತುದಿಯಲ್ಲೇ ಕೋಪ ಎಂದು ಹೇಳುವವರಿಗೆ ನಿಜವಾಗಿಯೂ ಕೋಪ ಕಾಣಿಸುತ್ತದೆಯೇ ! ಏಕೆಂದರೆ ಯಾರಾದರೂ ಆಗಲಿ ಅಣ್ಣ, ಅಕ್ಕ, ತಂಗಿ, ಗಂಡ, ಸ್ನೇಹಿತ ಯಾರೇ ಆದರೂ ಬೇರೆಯವರ ಕಡೆ ಬೆಟ್ಟು ಮಾಡಿ ಇವನಿಗೆ ಮೂಗಿನ ತುದಿಯಲ್ಲೇ ಕೋಪ ( ಮುಂಗೋಪಿ) ಎಂದು ಹೇಳುತ್ತಾರೆ. ಆದರೆ ಆ ವ್ಯಕ್ತಿಗೆ ನಿಜವಾಗಿಯೂ ಕೋಪ ಮೂಗಿನ ತುದಿಯಲ್ಲಿ ಇರುವುದು ಅನುಭವವಾಗುತ್ತದೆಯೇ ಎನ್ನುವುದು. ಏಕೆಂದರೆ ಯಾರೂ ನನಗೆ ಮೂಗಿನ ತುದಿಯಲ್ಲೇ ಕೋಪವಿದೆ ಎಂದು ಹೇಳಿಕೊಳ್ಳುವುದಿಲ್ಲ.
ಇನ್ನೊಂದು ಸಂದೇಹವಿದೆ. ಸ್ವಲ್ಪ ತಡೆಯಿರಿ. ಹಲವರ ಮುಖಗಳಲ್ಲಿ ಮೂಗಿನ ಪ್ರಾಮುಖ್ಯ ಜಾಸ್ತಿ. ಕಣ್ಣಿನ ನಂತರ ಮೂಗು ಮುಖಕ್ಕೆ ಲಕ್ಷಣ ಕೊಡುವುದು ಅಲ್ಲವೇ? ಆದರೆ ಮೂಗಿನ ತುದಿ ಮಾತ್ರ ಎಲ್ಲರಿಗೂ ಒಂದೇ ರೀತಿ ಇರುವುದಿಲ್ಲ ಎನ್ನುವುದು ಗೊತ್ತಿರುವ ವಿಷಯವೇ! ಕೆಲವರ ಮೂಗಿನ ತುದಿ ಚೂಪಾಗಿದ್ದು, ಕೆಲವರಲ್ಲಿ ತುದಿ ದಪ್ಪಗಿದ್ದರೆ, ಇನ್ನೂ ಕೆಲವರಲ್ಲಿ ಮೂಗಿನ ಹೊಳ್ಳೆಗಳೇ ಪಾಧಾನ್ಯವಾಗಿ ಮೂಗಿನ ತುದಿಯು ಮೇಲ್ಮಖವಾಗಿ ಆಕಾಶ ನೋಡುತ್ತಿದ್ದರೆ, ಸ್ವಲ್ಪ ಜನರಲ್ಲಿ ಮೂಗಿನ ತುದಿ ಮೇಲ್ತುಟಿಯನ್ನು ನೋಡುತ್ತಿದ್ದರೆ, ಇತರರಿಗೆ ಮೂಗು ತುದಿ ಗಿಳಿಮೂಗು ಆಗಿರುತ್ತದೆ.
ಮೂಗಿನ ತುದಿಯಲ್ಲೇ ಕೋಪ ಎಂದು ಹೇಳುವವರನ್ನು ನಾನು ಕೇಳಬೇಕಾಗಿದೆ " ಯಾವ ರೀತಿಯ ಮೂಗಿನ ತುದಿ ಇದ್ದರೆ ನೀವು ಅನುಭವಿಸಿದ ಹಾಗೆ ಅಥವಾ ಕಂಡ ಹಾಗೆ ಕೋಪ ತುದಿಯಲ್ಲಿದ್ದು ಬೇಗ ಸಿಟ್ಟಾಗುತ್ತಾರೆ. ತಬ್ಬಿಬ್ಬಾಗಬೇಡಿ. ಇಂದಿನಿಂದ ಗಂಭೀರವಾಗಿ ಮುಂಗೋಪಿ ಎಂದು ಕರೆಯುವ ಆಪ್ತೇಷ್ಟರು ಅಥವಾ ನಿಮ್ಮ ದ್ವೇಷಿಗಳನ್ನು ಗಮನಿಸಿ. ಕೋಪ ಯಾವ ಮೂಗಿನ ತುದಿಯಿದ್ದರೆ ಕೋಪ ಬೇಗ ಬರತ್ತದೆ ಎಂದು ! ತಿಳಿಯಲ್ಲಿಲ್ಲವೇ.
ಈಗ ಆ ವ್ಯಕ್ತಿಯನ್ನು ಛೇಡಿಸಿ, ರೇಗಿಸಿ, ಪೀಡಿಸಿ ತಕ್ಷಣ ಗೊತ್ತಾಗುತ್ತದೆ ..ಕೋಪ ಬಂದಿದೆಯೇ ....
ನಾಯಿದು ಗೊತ್ತು ಆದರೆ ತನ್ನದು ಗೊತ್ತಿಲ್ಲ...
ಬೆಳಿಗ್ಗೆ ಅಥವಾ ರಾತ್ರಿಯ ವೇಳೆ ನಾಯಿಗಳ ಯಜಮಾನರು ತಮ್ಮ ಸಾಕು ನಾಯಿಗಳನ್ನು ಅವುಗಳ ಬಹಿರ್ದೆಶೆಗೆ ( ಉಚ್ಚೆ, ಕಕ್ಕಸ್ಸು ಮಾಡಿಸಲು) ಕರೆದುಕೊಂಡು ಹೋಗುವುದನ್ನು ಸಿಟಿಯಲ್ಲಿ ವಾಸಿಸುವವರಿಗೆ ಗೊತ್ತೇಯಿದೆ! . ನಾಯಿ ಕಕ್ಕಸ್ಸು ಮಾಡುವ ಜಾಗ ಹುಡುಕುತ್ತಾ ಓಡಿದರೆ , ಅದನ್ನು ಹಿಡಿದಿರುವ ಯಜಮಾನ/ ಯಜಮಾನಿಗೆ ಅದು ನಡುಗೆಯಂತೆ. ನಾಯಿ ಕಕ್ಕಸ್ಸು ಮಾಡುವುದನ್ನು ನೋಡುತ್ತಾ ಕಾಯುವ ಮಂದಿಗೆ , ಅದೇ ಸ್ವಲ್ಪ ದೂರದಲ್ಲಿ ಯಾರಾದರೂ ಗಿಡದ ಅಥವಾ ಮರೆಯಲ್ಲಿ ಮೂತ್ರ ವಿಸರ್ಜಿಸುತ್ತಿದ್ದರೆ ಇದು ಅಸಹ್ಯವಂತೆ.
ಸ್ವಚ್ಛತೆ ಬಗ್ಗೆ , ಕಸದ ಬಗ್ಗೆ , ಮೂತ್ರ ವಿಸರ್ಜನೆಯ ಬಗ್ಗೆ ಮಾತನಾಡುವ ನಾಗರಿಕರಾದ ನಮ್ಮಲ್ಲಿ ಹಲವರು ತಮ್ಮ ನಾಯಿಗಳನ್ನು ಗುರುತು ಪರಿಚಯವಿಲ್ಲದವರ ಮನೆಯ ಮುಂದೆ ಎಲ್ಲೆಂದರಲ್ಲಿ ಮೂತ್ರ ಮತ್ತು ಮಲ ವಿಸರ್ಜನೆ ಮಾಡಿಸುವುದಕ್ಕೆ ಅಭ್ಯಂತರವಿಲ್ಲ! ಎಂಥಾ ವಿಪರ್ಯಾಸ ಅಲ್ಲವೇ?
ನಮ್ಮ ಸ್ನೇಹಿತರೊಬ್ಬರಿಗೆ ಮೂಲಸ್ಥಾನದಲ್ಲಿ ( ಗುದದ್ವಾರ) ನೋವಾಗುತ್ತಿದೆ , ಉಧಾಸೀನ ಮಾಡಬಾರದೆಂದು ವೈದ್ಯರನ್ನು ಸಂದರ್ಶಿಸಿದರೆ " ಮಲ ಹೋಗುವಾಗ ರಕ್ತವೇನಾದರೂ ಕಂಡಿತೆ?" ಎಂದು ಕೇಳಿದರಂತೆ. " ನಾನು ನೋಡಿಲ್ಲ ನಾಳೆ ಸರಿಯಾಗೆ ನೋಡಿ ಹೇಳುತ್ತೇನೆ" ಎಂದು ಹೇಳಿಬಂದರಂತೆ. ಅವರು ಈ ವಿಷಯ ಹೇಳಿದಾಗ ನನಗೆ ನಗುವೇ ಬಂದಿತು. ಅವನು ನಾಯನ್ನು ಕರೆದುಕೊಂಡು ಅದು ಕಕ್ಕಸ್ಸು ಮಾಡುವುದನ್ನು ಸಾವಧಾನವಾಗಿ ಗಮನಿಸುವ ಇವನು , ಅವನೇ ಹೋಗುವ ಮಲದ ಜೊತೆಗೆ ರಕ್ತ ಬಂದಿತ್ತೇ ಎಂಬುದು ಗಮನಿಸಿಲ್ಲ. ಅದಕ್ಕೇ ಒಂದು ದಿನ ಬೇಕು ಎಂದು ವಾಪಸ್ಸು ಬಂದನಲ್ಲ , ಏನು ಹೇಳಬೇಕು? ಪಾಯಿಖಾನೆಗೆ ಹೋದ ನಂತರ ತಕ್ಷಣ ನೀರಿನ ಸಂಗ್ರಹಣೆಯ ತೊಟ್ಟಿಯನ್ನು ಒತ್ತಿ ಪ್ಲಷ್ ಮಾಡುವುದರಿಂದ , ಅವನಿಗೆ ಯಾವಾಗಲಿಂದ ಈ ಸಮಸ್ಯೆಯಿತ್ತು ಎನ್ನುವುದೇ ತಿಳಿಯಲಿಲ್ಲ?
ನಿಮ್ಮಲ್ಲೂ ಇಂಥ ಜನರಿದ್ದಾರೆ ಅಲ್ಲವೇ?
ಸ್ವಚ್ಛತೆ ಬಗ್ಗೆ , ಕಸದ ಬಗ್ಗೆ , ಮೂತ್ರ ವಿಸರ್ಜನೆಯ ಬಗ್ಗೆ ಮಾತನಾಡುವ ನಾಗರಿಕರಾದ ನಮ್ಮಲ್ಲಿ ಹಲವರು ತಮ್ಮ ನಾಯಿಗಳನ್ನು ಗುರುತು ಪರಿಚಯವಿಲ್ಲದವರ ಮನೆಯ ಮುಂದೆ ಎಲ್ಲೆಂದರಲ್ಲಿ ಮೂತ್ರ ಮತ್ತು ಮಲ ವಿಸರ್ಜನೆ ಮಾಡಿಸುವುದಕ್ಕೆ ಅಭ್ಯಂತರವಿಲ್ಲ! ಎಂಥಾ ವಿಪರ್ಯಾಸ ಅಲ್ಲವೇ?
ನಮ್ಮ ಸ್ನೇಹಿತರೊಬ್ಬರಿಗೆ ಮೂಲಸ್ಥಾನದಲ್ಲಿ ( ಗುದದ್ವಾರ) ನೋವಾಗುತ್ತಿದೆ , ಉಧಾಸೀನ ಮಾಡಬಾರದೆಂದು ವೈದ್ಯರನ್ನು ಸಂದರ್ಶಿಸಿದರೆ " ಮಲ ಹೋಗುವಾಗ ರಕ್ತವೇನಾದರೂ ಕಂಡಿತೆ?" ಎಂದು ಕೇಳಿದರಂತೆ. " ನಾನು ನೋಡಿಲ್ಲ ನಾಳೆ ಸರಿಯಾಗೆ ನೋಡಿ ಹೇಳುತ್ತೇನೆ" ಎಂದು ಹೇಳಿಬಂದರಂತೆ. ಅವರು ಈ ವಿಷಯ ಹೇಳಿದಾಗ ನನಗೆ ನಗುವೇ ಬಂದಿತು. ಅವನು ನಾಯನ್ನು ಕರೆದುಕೊಂಡು ಅದು ಕಕ್ಕಸ್ಸು ಮಾಡುವುದನ್ನು ಸಾವಧಾನವಾಗಿ ಗಮನಿಸುವ ಇವನು , ಅವನೇ ಹೋಗುವ ಮಲದ ಜೊತೆಗೆ ರಕ್ತ ಬಂದಿತ್ತೇ ಎಂಬುದು ಗಮನಿಸಿಲ್ಲ. ಅದಕ್ಕೇ ಒಂದು ದಿನ ಬೇಕು ಎಂದು ವಾಪಸ್ಸು ಬಂದನಲ್ಲ , ಏನು ಹೇಳಬೇಕು? ಪಾಯಿಖಾನೆಗೆ ಹೋದ ನಂತರ ತಕ್ಷಣ ನೀರಿನ ಸಂಗ್ರಹಣೆಯ ತೊಟ್ಟಿಯನ್ನು ಒತ್ತಿ ಪ್ಲಷ್ ಮಾಡುವುದರಿಂದ , ಅವನಿಗೆ ಯಾವಾಗಲಿಂದ ಈ ಸಮಸ್ಯೆಯಿತ್ತು ಎನ್ನುವುದೇ ತಿಳಿಯಲಿಲ್ಲ?
ನಿಮ್ಮಲ್ಲೂ ಇಂಥ ಜನರಿದ್ದಾರೆ ಅಲ್ಲವೇ?
Wednesday, 26 September 2012
ಈ ವಾಸನೆ ಬೇಕೇ ಬೇಕು!......
ನಮ್ಮ ವಠಾರದ ಎದುರು ಮನೆಯಲ್ಲಿ ವಾಸವಾಗಿರೋ ಸೀನನಿಗೆ ಯಾರೋ ವೈದ್ಯರು ಗೋಮೂತ್ರ ಚಿಕಿತ್ಸೆ ನೀಡಿ ಅವನ ದೇಹದ ಅಂದರಿನಲ್ಲಿದ್ದ ಯಾವುದೋ ಕಾಯಿಲೆಯನ್ನು ಗುಣಪಡಿಸಿದ್ದಾರಂತೆ. ಗೋಮೂತ್ರವನ್ನು ಅವರು ಆರು ತಿಂಗಳು ಕಾಲ ಚಿಕಿತ್ಸೆಯಾಗಿ ತೆಗೆದುಕೊಂಡು ಗೋಮೂತ್ರದ ವಾಸನೆಗೆ ಚೆನ್ನಾಗಿ ಒಗ್ಗಿ ಹೋಗಿದ್ದಾರೆ. ಈಗ ಅವರ ಅಂದರಿನ ಕಾಯಿಲೆ ವಾಸಿಯಾಗಿ ಬೇರೆ ರೀತಿಯ ವಾಸನೆ ಕಾಯಿಲೆ ಶುರುವಾಗಿದೆ ಎಂದು ನಮ್ಮ ವಠಾರದವರೂ ಸೇರಿದಂತೆ ಸುತ್ತುಮುತ್ತಲಿನವರೆಲ್ಲಾ ಗುಸುಗುಸು...
ನಮ್ಮ ಕಾಲೋನಿಯನ್ನ್ಲಿ ಅಲ್ಲಲ್ಲಿ ಕೆಲವರು ಹಸುಗಳನ್ನು ಸಾಕಿದ್ದಾರೆ. ಬೆಳಿಗ್ಗೆ ಹಾಲು ಹಿಂಡಿಕೊಂದು ಹಸುಗಳನ್ನು ಬಿಟ್ಟರೆ ಸಾಯಂಕಾಲವೇ ಹಾಲು ಹಿಂಡಲು ಮನೆಗೆ ಕರೆದುಕೊಳ್ಳುವುದು ಈ ಕಾಲೊನಿಯಲ್ಲಿ ವಾಡಿಕೆ. ಅವು ಅಲ್ಲಲ್ಲಿ ನಿಂತು ಮೂತ್ರ ( ಗಂಜಲ) ವಿಸರ್ಜಿಸಿ ಕೆಸರು ಮಾಡೀರುತ್ತವೆ. ಈ ಗಂಜಲದ ವಾಸನೆ ಕೆಲವು ಬಾರಿ ಗಬ್ಬುನಾತ ಬರುತ್ತಿರುತ್ತದೆ.
ಚಿಕಿತ್ಸೆ ನಿಂತು ಎರಡು ತಿಂಗಳಿನ ನಂತರ ಈ ಆಸಾಮಿಗೆ ಒಂದು ಚಟ ಬಂದಿದೆಯಂತೆ. ಗೋಮೂತ್ರ ಸೇವಿಸುವಾಗ ಅದರ ವಾಸನೆಯ ಅಭ್ಯಾಸವಾಗಿ ಆ ಗಂಜಲದ ವಾಸನೆಯಿಲ್ಲದಿದ್ದರೆ ಸರಿಯಾಗಿ ಊಟ ಸೇರುವಿದಿಲ್ಲವಂತೆ ಮತ್ತು ನಿದ್ದೆ ಬರುವುದಿಲ್ಲವಂತೆ.
ಇವನು ಯಾರಿಗೂ ಹೇಳದೆ ಹಸುವಿನ ಗಂಜಲವಿರುವ ಸ್ಥಳದಲ್ಲಿ ಬಂದು ಒಂದೈದು ನಿಮಿಷ ನಿಂತು ಗಂಜಲದ ಗಬ್ಬುನಾತವನ್ನು ಆಘ್ರಾಣಿಸಿ ಮನೆಗೆ ಹೋಗಿ ಊಟ ಮಾಡಿ , ಮತ್ತೆ ವಾಕಿಂಗ್ ಅಂತ ನೆಪ ಹೇಳಿ ಮಲಗುವ ಮೊದಲು ಗಂಜಲವಿರುವ ಸ್ಥಳಕ್ಕೆ ಹೋಗಿ ವಾಸನೆ ಹಿಡಿದು ಮನೆಗೆ ಬಂದು ಮಲಗು ನಿದ್ರಿಸುತ್ತಾನಂತೆ. ಈ ವಠಾರದ ಜನರು ಇದನ್ನು ಗಮನಿಸಿಕೊಂಡೇ ಗುಲ್ಲಿಬ್ಬಿಸಿದ್ದಾರೆ...
ನಮ್ಮ ಕಾಲೋನಿಯನ್ನ್ಲಿ ಅಲ್ಲಲ್ಲಿ ಕೆಲವರು ಹಸುಗಳನ್ನು ಸಾಕಿದ್ದಾರೆ. ಬೆಳಿಗ್ಗೆ ಹಾಲು ಹಿಂಡಿಕೊಂದು ಹಸುಗಳನ್ನು ಬಿಟ್ಟರೆ ಸಾಯಂಕಾಲವೇ ಹಾಲು ಹಿಂಡಲು ಮನೆಗೆ ಕರೆದುಕೊಳ್ಳುವುದು ಈ ಕಾಲೊನಿಯಲ್ಲಿ ವಾಡಿಕೆ. ಅವು ಅಲ್ಲಲ್ಲಿ ನಿಂತು ಮೂತ್ರ ( ಗಂಜಲ) ವಿಸರ್ಜಿಸಿ ಕೆಸರು ಮಾಡೀರುತ್ತವೆ. ಈ ಗಂಜಲದ ವಾಸನೆ ಕೆಲವು ಬಾರಿ ಗಬ್ಬುನಾತ ಬರುತ್ತಿರುತ್ತದೆ.
ಚಿಕಿತ್ಸೆ ನಿಂತು ಎರಡು ತಿಂಗಳಿನ ನಂತರ ಈ ಆಸಾಮಿಗೆ ಒಂದು ಚಟ ಬಂದಿದೆಯಂತೆ. ಗೋಮೂತ್ರ ಸೇವಿಸುವಾಗ ಅದರ ವಾಸನೆಯ ಅಭ್ಯಾಸವಾಗಿ ಆ ಗಂಜಲದ ವಾಸನೆಯಿಲ್ಲದಿದ್ದರೆ ಸರಿಯಾಗಿ ಊಟ ಸೇರುವಿದಿಲ್ಲವಂತೆ ಮತ್ತು ನಿದ್ದೆ ಬರುವುದಿಲ್ಲವಂತೆ.
ಇವನು ಯಾರಿಗೂ ಹೇಳದೆ ಹಸುವಿನ ಗಂಜಲವಿರುವ ಸ್ಥಳದಲ್ಲಿ ಬಂದು ಒಂದೈದು ನಿಮಿಷ ನಿಂತು ಗಂಜಲದ ಗಬ್ಬುನಾತವನ್ನು ಆಘ್ರಾಣಿಸಿ ಮನೆಗೆ ಹೋಗಿ ಊಟ ಮಾಡಿ , ಮತ್ತೆ ವಾಕಿಂಗ್ ಅಂತ ನೆಪ ಹೇಳಿ ಮಲಗುವ ಮೊದಲು ಗಂಜಲವಿರುವ ಸ್ಥಳಕ್ಕೆ ಹೋಗಿ ವಾಸನೆ ಹಿಡಿದು ಮನೆಗೆ ಬಂದು ಮಲಗು ನಿದ್ರಿಸುತ್ತಾನಂತೆ. ಈ ವಠಾರದ ಜನರು ಇದನ್ನು ಗಮನಿಸಿಕೊಂಡೇ ಗುಲ್ಲಿಬ್ಬಿಸಿದ್ದಾರೆ...
ಕಣ್ಣಲ್ಲಿ ಕಣ್ಣಿಟ್ಟು.....
ಮೊನ್ನೆ ನಮ್ಮ ಪಡ್ಡೆ ಹುಡುಗ ಯಾವುದೋ ಒಂದು ಪರ್ಸನಾಲಿಟಿ ಕೋರ್ಸ್ ಗೆ ಹೋಗಿ ಬಂದಿದ್ದ. ಅಲ್ಲಿ ಹೇಳಿಕೊಟ್ಟ ಒಂದು ವಿಷಯ ಎಂದರೆ ಯಾರನ್ನಾದರು ನೀನು ಮಾತನಾಡಿಸುವಾಗ ಅವರ ಕಣ್ಣುಗಳನ್ನು ನೇರವಾಗಿ ನೋಡು ಹಾಗು ನೋಡುತ್ತಲೇ ಮಾತನಾಡು. ಇದರಿಂದ ಬಹಳ ಅನುಕೂಲವಿದೆ. ಪಡ್ಡೆ ಹುಡುಗ ಸ್ವಾರಸ್ಯವಾದ ಈ ವಿಷಯವನ್ನು ಅವನ ಗೆಳೆಯರ ಗುಂಪಿನಲ್ಲಿ ಪ್ರಯೋಗಿಸಿ ವಿಶೇಷ ಅನುಭವ ಪಡೆದಿದ್ದಾನೆ. ಅದು ಆದದ್ದು ಹೀಗೆ...
ಹದಿನೈದು ಜನರ ಗುಂಪಿನಲ್ಲಿ ಹೀಗೆ ಯಾವುದೋ ವಿಷಯ ಕುರಿತು ಮಾತುಕತೆ , ಚರ್ಚೆ ನಡೆಯುತ್ತಿತ್ತು. ಗುಂಪಿನಲ್ಲಿ ಹಲವರಿಗೆ ಗಳಸ್ಯ ದೋಸ್ತಿಗಳು, ಇನ್ನು ಕೆಲವರಿಗೆ ಸ್ನೇಹಿತರು ಮಾತ್ರ, ಇನ್ನು ಕೆಲವರಿಗೆ ಅಷ್ಟಕ್ಕಷ್ಟೆ. ಕೊನೆಯ ವರ್ಗದ ಗುಂಪಿನ ಸ್ನೇಹಿತನ ಜೊತೆಗೆ ನಮ್ಮ ಪಡ್ಡೆ ಹುಡುಗ ಯಾವುದೋ ವಿಷಯಕ್ಕೆ ಬಿಸಿಯಾದ ಚರ್ಚೆ ಶುರುವಾಗಿದೆ. ಇದೇ ಸಮಯದಲ್ಲಿ ಈ ಪಡ್ಡೆ ಹುಡುಗ ಎದುರಾಳಿಯ ಕಣ್ಣುಗಳನ್ನೇ ನೋಡುತ್ತಾ ವಾದ ಮಾಡಿದ್ದಾನೆ. ಅವನು " ಏನು ಗುರಾಯಿಸಿ ಮಾತನಾಡುತಾ ಇದ್ದೀಯಾ..ಇನ್ನೊಂದು ಸಲ ಹಾಗೆ ಕಣ್ಣಲ್ಲಿ ಗುರಾಯಿಸಿದರೆ ನೋಡು ನಿನ್ನ ದವಡೆ ಹಲ್ಲುಗಳು ಕಡಿಮೆಯಾಗುತ್ತೆ" ಎಂದು ಹೆದರಿಸಿದ್ದಾನೆ.
ಈಗೆ ನಮ್ಮ ಪಡ್ಡೆ ಹುಡುಗನಿಗೆ ಅಳುಕು ಶುರು ಆಗಿಬಿಟ್ಟಿದೆ. ಅಲ್ಲಿ ಕೋರ್ಸ್ ನಲ್ಲಿ ಹೇಳಿದ ಇನ್ನೂ ಹಲವು ವಿಷಯಗಳನ್ನು ಪ್ರಯೋಗಿಸುವುದೋ ಅಥವಾ ಪ್ರಯೋಗಿಸಿ ಮುಖದ ಒಂದೊಂದು ಭಾಗವನ್ನು ವಿಕಾರಗೊಳಿಸುವುದೋ ಎಂದು?
ನೀವಾದರೂ ಕಣ್ಣಲ್ಲಿ ಕಣ್ಣಿಟ್ಟು.. ಯಾವಾಗ , ಯಾರ ಹತ್ತಿರ , ಎಲ್ಲಿ, ಎಷ್ಟು ಸಮಯ ನೋಡಬಹುದು ಅಂತ ಸಮಾಧಾನದ ಉತ್ತರ ಹೇಳ್ತೀರ........
Tuesday, 25 September 2012
ತೂಕ ಕಡಿಮೆ ಆಗಲಿಲ್ಲ..ಗುರುವೇ!
ನಮ್ಮ ರಮೇಶನಿಗೆ ಇತ್ತೀಚೆಗೆ ಏನೋ ಗೀಳು ಹತ್ತಿಕೊಂಡಿದೆ. ಏಕೆಂದರೆ ಅವನ ಮನೆಯವರು ಮತ್ತು ಸ್ನೇಹಿತರು " ನೀನು ತೂಕ ಕಡಿಮೆ ಮಾಡಿಕೊಂಡರೆ ಸ್ಮಾರ್ಟ್ ಕಾಣುತ್ತೀಯ , ಒಂದು ಹೆಣ್ಣು ಸಿಗುವವರೆಗಾದರೂ ತೂಕ ಕಡಿಮೆ ಮಾಡಿಕೊಳ್ಳೋ .." ಎಂದು ೮೮ ಕಿಲೋ ತೂಕವಿರುವ ರಮೇಶನಿಗೆ ಕಿವಿಯಲ್ಲಿ ಸಣ್ಣ ಹುಳವನ್ನು ಬಿಟ್ಟಿದ್ದಾರೆ. ಅದಕ್ಕೋಸ್ಕರ ಕೆಲಸ ಪ್ರಾರಂಭವಾಗಿದೆ.
ಈಗ 3 ತಿಂಗಳಿನಿಂದ ಬೆಳಿಗ್ಗೆ 6 ಗಂಟೆಯಿಂದ 7 ಗಂಟೆಯವರೆಗೆ ಒಬ್ಬನೇ ವಾಕಿಂಗ್ ಪ್ರಾರಂಭಿಸಿದ್ದಾನೆ. ಪ್ರತಿ ದಿನ ಕಷ್ಟಪಟ್ಟು ಅಲಾರಂ ಶಬ್ಧಕ್ಕೆ ಎದ್ದೇಳಿ..ತೂಕವಿಳಿಸುವ ಆಸಕ್ತಿಯಿಂದ ಅಭ್ಯಾಸ ಮಾಡಿದ್ದಾನೆ. ಈ ಒಂದು ಗಂಟೆ ಅವಧಿಯಲ್ಲಿ ಅವನು ಹೋಗುವ ದೂರ ಕೇವಲ 2 ರಿಂದ 3 ಕಿಮಿ, ಅಷ್ಟಕ್ಕೆ ಸುಸ್ತಾಗುತ್ತಾನಂತೆ. ಅದಕ್ಕೆ ಬೆಳಿಗ್ಗೆಯೇ ಬಿಸಿ ಬಿಸಿ ಇಡ್ಲಿ , ವಡೆ ತಿನ್ನುತ್ತಾನಂತೆ. ಅದನ್ನು ತಿಂದು ಕಾಫಿ ಕುಡಿದು ಮನೆಗೆ ಬರುತ್ತಿದ್ದಾನೆ. ಈ ವಿಷಯ ಮನೆಯಲ್ಲಿ ಯಾರಿಗೂ ಹೇಳಿರಲಿಲ್ಲ.
ಈಗೆ ಅವನಿಗೆ ವಾಕಿಂಗ್ ಗಿಂತ ಬೆಳಿಗ್ಗೆಯ ಇಡ್ಲಿ ವಡೆಯ ರುಚಿಗೆ ಅಲ್ಲಿಗೆ ಹೋಗುವಂತಾಗಿದೆಯಂತೆ. ಮೊನ್ನೆ ಯಾವಾಗಲೋ ತೂಕ ನೋಡಿಕೊಂಡವನು ಗಾಬರಿಯಾಗಿದ್ದಾನೆ. ೯೫ ಕಿಲೊಗೆ ತೂಕದಲ್ಲಿ ಮುಳ್ಳು ನಿಂತುಬಿಟ್ಟಿದೆ. ವಾಕಿಂಗ್ ಮಾಡಿದ್ದರಿಂದನೇ ತೂಕ ಜಾಸ್ತಿಯಾಯಿತು ಇಂದು ತರ್ಕ ಮಾಡುತ್ತಿದ್ದಾನೆ. ಇನ್ನು ಮುಂದೆ ವಾಕಿಂಗ್ ಗೆ ಹೋಗುವುದಿಲ್ಲ ಎಂದು ಹೇಳುತ್ತಿದ್ದಾನೆ.
ಗುರುವೇ !.. ಇವನಿಗೆ ಜಿಮ್ ವಿಳಾಸ ತಿಳಿಸಿ ಹಾಗು ಅಲ್ಲಿರುವ ಹೋಟೆಲ್ , ಜ್ಯೂಸ್ ,ಇತರೆ ಪಾನಿಯ ದೊರಕುವ ವಿವರವನ್ನು ಕೊಡಿ, ಎರಡೂ ಕಡೆ ಚೆನ್ನಾಗಿ ವ್ಯಾಪಾರ ಪ್ರತಿದಿನ ಖಡ್ಡಾಯವಾಗಿ ಆಗುತ್ತದೆ.
Subscribe to:
Posts (Atom)